ಅದೇ ರೀತಿ ದೇವಾಲಯದ ಆವರಣದಲ್ಲಿಯೇ 150 ಅಡಿ ಎತ್ತರದ ಬೃಹತ್ ಆಂಜನೇಯಸ್ವಾಮಿ ಪ್ರತಿಷ್ಠಾಪನೆಗಾಗಿ ಕಾಮಗಾರಿ ನಡೆಯುತ್ತಿದ್ದು, ಅದಕ್ಕಾಗಿ ಭಕ್ತರು ಕೊಟ್ಟ ದೇಣಿಗೆ ಹಣವು ಇತ್ತು. ಅಲ್ಲದೇ, ಶನಿವಾರ ಬೆಳಿಗ್ಗೆಯಿಂದ ರಾತ್ರಿ 10ರವರೆಗೆ ಭಕ್ತರು ಪೂಜೆ, ಹರಕೆ ರೂಪದಲ್ಲಿ ಸಲ್ಲಿಸಿದ ಕಾಣಿಕೆ ಮೊತ್ತವೂ ಸೇರಿ ₹ 13 ಲಕ್ಷ ನನ್ನ ಬಳಿ ಇತ್ತು ಎಂದು ಧನಂಜಯಸ್ವಾಮಿ ಪೊಲೀಸರಿಗೆ ವಿವರಣೆ ನೀಡಿದ್ದಾರೆ.