ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಪಕ್ಷದ ಪಾಲಿಟ್ ಬ್ಯೂರೊ ಸದಸ್ಯೆ ಬೃಂದಾ ಕಾರಟ್, ‘ಈ ಬಾರಿ ನಮ್ಮ ಪಕ್ಷ ಮೂರು ಅಂಶಗಳನ್ನಿಟ್ಟು ಹೋರಾಟ ನಡೆಸುವುದು. ಮೊದಲನೆಯದು ಮೋದಿ ನೇತೃತ್ವದ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದು. ಎರಡನೆಯದು ಎಡಪಂಥೀಯ ಪಕ್ಷಗಳಿಗೇ ಮತ ನೀಡುವಂತೆ ಜನರ ಮನವೊಲಿಸುವುದು ಮತ್ತು ಮೂರನೆಯದಾಗಿ ಕೇಂದ್ರದಲ್ಲಿ ಜಾತ್ಯತೀತ ಸರ್ಕಾರವನ್ನು ರಚಿಸುವುದು’ ಎಂದರು.