‘ಅನಿಯಂತ್ರಿತ ಟೀಕೆಯು ನ್ಯಾಯಮೂರ್ತಿಗಳ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟುಮಾಡುತ್ತದೆ. ಜೊತೆಗೆ ಅವರ ಆತ್ಮವಿಶ್ವಾಸವನ್ನು ಸಹ ಗಾಸಿಗೊಳಿಸುತ್ತದೆ. ಸಾಮಾಜಿಕ ಮಾಧ್ಯಮವೂ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಯಾವುದೇ ತೀರ್ಪನ್ನು ವಿಮರ್ಶಿಸುವ ಬದಲು ಅದನ್ನು ನೀಡಿದ ನ್ಯಾಯಮೂರ್ತಿಗಳನ್ನು ವಿಮರ್ಶೆಗೆ ಒಳಪಡಿಸುವುದು ಮಾನನಷ್ಟಕ್ಕೆ ಸಮನಾದ ಅಪರಾಧ’ ಎಂದು ಸುದ್ದಿಸಂಸ್ಥೆಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಅವರು ಹೇಳಿದರು.