ಬಿಎಸ್ವೈ ಜತೆ ಬಂದಿದ್ದು ಆಕಸ್ಮಿಕ
ನವದೆಹಲಿ: ‘ನಾನು ಮತ್ತು ಬಿ.ಎಸ್. ಯಡಿಯೂರಪ್ಪ ಒಂದೇ ವಿಮಾನದಲ್ಲಿ ದೆಹಲಿಗೆ ಬಂದಿರುವುದು ಕಾಕತಾಳೀಯ. ರಾಜಕಾರಣವೇ ಬೇರೆ, ಸ್ನೇಹವೇ ಬೇರೆ. ವಿಧಾನಸೌದಕ್ಕೆ ಒಟ್ಟಿಗೆ ಹೋದಂತೆ, ವಿಮಾನದಲ್ಲೂ ಒಟ್ಟಿಗೆ ಪ್ರಯಾಣ ಮಾಡಿದ್ದೇವೆ. ಇಲ್ಲಸಲ್ಲದ ವದಂತಿ ಹರಿಬಿಟ್ಟು, ಬಣ್ಣ ಬಳಿಯುವ ಅಗತ್ಯವಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.