ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಕೊಲ್ಲಲು ಗುತ್ತಿಗೆ ಕೊಡುವಿರಾ? ಫೇಸ್‌ಬುಕ್‌ನಲ್ಲಿ ಬೇಡಿಕೆಯಿಟ್ಟ ಯುವಕನ ಬಂಧನ

Last Updated 28 ಮಾರ್ಚ್ 2019, 11:57 IST
ಅಕ್ಷರ ಗಾತ್ರ

ಜೈಪುರ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೊಲ್ಲಲು ಫೇಸ್‌ಬುಕ್‌ನಲ್ಲಿ ಬೇಡಿಕೆಯಿಟ್ಟಿದ್ದ ಜೈಪುರದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಹರಿಯಾಣದ ರೇವರಿ ಜಿಲ್ಲೆಯ ನಿವಾಸಿ ನವೀನ್ ಕುಮಾರ್ ಯಾದವ್(31) ಎಂಬಾತನೇ ಬಂಧಿತ ಆರೋಪಿ. ಈತ ಮಾರ್ಚ್‌ 26ರಂದುಫೇಸ್‌ಬುಕ್‌ನಲ್ಲಿ ಮೋದಿ ಕುರಿತು ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದ.

ಮೋದಿಯನ್ನು ಕೊಲ್ಲಲು ನನಗೆ ಯಾರಾದರೂ ಗುತ್ತಿಗೆ ಕೊಡುವಿರಾ? ನನ್ನ ಬಳಿ ದೊಡ್ಡ ಯೋಜನೆ ಇದೆ ಎಂದು ಬರೆದುಕೊಂಡಿದ್ದ.

ನಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರಇದುವರೆಗೆ ಕೈಗೊಂಡ ಕೆಲಸಗಳಿಂದ ಹತಾಶೆಗೊಂಡಿದ್ದೇನೆಹಾಗೂ ಅವರ ಸಿದ್ಧಾಂತಗಳ ಬಗ್ಗೆಯೂ ಬೇಸರವಿದೆ ಎಂದು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿರುವುದಾಗಿಬಜಾಜ್ ನಗರ ಪೊಲೀಸ್ ಠಾಣೆಯ ಮನ್ವೇಂದರ್ ಸಿಂಗ್ ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದ್ದ ಈತನ ವಿರುದ್ಧ ದೂರು ದಾಖಲಿಸಿಕೊಂಡು ಸೈಬರ್‌ ವಿಭಾಗದ ಸಹಾಯದಿಂದ ಬಂಧಿಸಲಾಗಿದೆ ಎಂದು ಡಿಸಿಪಿ ರಾಹುಲ್ ಜೈನ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT