ಸಂಘಟಕರಲ್ಲಿ ಒಬ್ಬರಾದ ಸಂಜಯ್ ರಾಯ್ ಪ್ರಾಸ್ತಾವಿಕವಾಗಿ ಮಾತನಾಡಿ, ‘ನಾವಿಂದು ಹಣ ಮಾಡುವ ಅವಸರದಲ್ಲಿ, ದೈನಂದಿನ ಜಂಜಡದಲ್ಲಿ ಕಲೆ–ಸಾಹಿತ್ಯದ ಮಹತ್ವವನ್ನು ಮರೆಯುತ್ತಿದ್ದೇವೆ. ಧರ್ಮ, ದೇಶ, ಭಾಷೆಗಳ ಗಡಿಯಿಲ್ಲದೆ ಎಲ್ಲರನ್ನೂ ಒಂದುಗೂಡಿಸಿ ನಾವೆಲ್ಲರೂ ಮಾನವರು ಎಂಬ ಅರಿವುನ್ನು ಮೂಡಿಸುವ ಪ್ರಯತ್ನವನ್ನು ಜೈಪುರ ಸಾಹಿತ್ಯೋತ್ಸವ ಮಾಡುತ್ತಿದೆ’ ಎಂದರು.