ಭಾನುವಾರ ಮಧ್ಯಾಹ್ನದ ಊಟ ಮುಗಿಸಿ ಕೋಣೆಗೆ ಹೋಗಿದ್ದ ಅವರು ಅಲ್ಲಿಂದ ಹೊರಗೆ ಬಂದಿರಲಿಲ್ಲ.ಸೋಮವಾರ ಬೆಳಗ್ಗೆ ಪ್ರಾರ್ಥನೆ ವೇಳೆ ಪಾದ್ರಿಯನ್ನು ಕಾಣದೇ ಇದ್ದಾಗ ಕೆಲಸದವರು ಬಂದು ಬಾಗಿಲು ತಟ್ಟಿದ್ದಾರೆ. ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಲಭಿಸದೇ ಇದ್ದಾಗ ಬಾಗಿಲು ಮುರಿದು ಒಳಗೆ ನುಗ್ಗಿದ್ದಾರೆ, ಈಗ ಮೃತದೇಹವನ್ನು ದಸ್ವಾ ಆಸ್ಪತ್ರೆಯಲ್ಲಿರಿಸಲಾಗಿದೆ.
ಫಾದರ್ ಕುರಿಯಾಕೋಸ್ ಅವರಿಗೆ ಆರೋಗ್ಯ ಸಮಸ್ಯೆ ಇತ್ತುಎಂಬ ಸುದ್ದಿಯೂ ಇದೆ.ಫ್ರಾಂಕೊ ಮುಲ್ಲಕಲ್ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಕುರಿಯಾಕೋಸ್ ಅವರಿಗೆ ಬೆದರಿಕೆ ಇತ್ತು ಎಂದು ಅವರ ಸಹೋದರ ಜೋಸ್ ಕಾಟ್ಟುತ್ತರ ಆರೋಪಿಸಿದ್ದಾರೆ.