ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರ: ಐವರು ಉಗ್ರರ ಬಂಧನ

Last Updated 16 ಜನವರಿ 2020, 20:04 IST
ಅಕ್ಷರ ಗಾತ್ರ

ಶ್ರೀನಗರ: ಗಣರಾಜ್ಯೋತ್ಸವ ದಿನದಂದು ದಾಳಿ ನಡೆಸಲು ಸಂಚು ರೂಪಿಸಿದ್ದ ಜೈಷೆ ಮೊಹಮ್ಮದ್‌ನ ಐವರು ಉಗ್ರರನ್ನು ಬಂಧಿಸಿದ್ದು, ದಾಳಿಗೆ ಬಳಸಲು ಸಿದ್ಧಪಡಿಸಿದ್ದ ಸ್ಫೋಟಕ ಮಾದರಿಯನ್ನು ನಾಶಗೊಳಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.

‘ಶ್ರೀನಗರ ಪೊಲೀಸರು ಉಗ್ರರ ಸಂಚನ್ನು ವಿಫಲಗೊಳಿಸಿದ್ದಾರೆ.ಹಜರತ್‌ ಬಾಲ್‌ ಪ್ರದೇಶದಲ್ಲಿಎರಡು ಗ್ರೆನೇಡ್‌ಗಳನ್ನು ಇವರು ಸ್ಫೋಟಿಸಿದ್ದರು.ಗಣರಾಜ್ಯ ದಿನಕ್ಕೂ ಮುನ್ನ ಸಂಭವನೀಯ ದಾಳಿ ತಪ್ಪಿಸಲಾಗಿದೆ. ಐವರು ಉಗ್ರರಿಂದ ಭಾರಿ ಸ್ಫೋಟಕವನ್ನು ವಶಪಡಿಸಿ ಕೊಳ್ಳಲಾಗಿದೆ’ ಎಂದು ಕಾಶ್ಮೀರ ಪೊಲೀಸ್ ಇಲಾಖೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT