ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ತ್ಯಾಜ್ಯ ಸಂಸ್ಕರಣೆ ಮತ್ತು ವಿಲೇವಾರಿ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅಗತ್ಯ ಪರಿಸರ ಅನುಮತಿ ಪಡೆಯಲಾಗಿಲ್ಲ. ಗಾಳಿ, ನೀರು (ಮಾಲಿನ್ಯ ನಿಯಂತ್ರಣ ತಡೆ) ಮತ್ತು ಪರಿಸರ (ಸಂರಕ್ಷಣೆ) ಕಾಯ್ದೆಗಳನ್ನೂ ಉಲ್ಲಂಘಿಸಲಾಗಿದೆ ಎಂದು ದೂರುವ ಮೂಲಕ ಘಟಕ ಮುಚ್ಚುವಂತೆ ಕೋರಿದ್ದ ರಿಟ್ ಅರ್ಜಿಯನ್ನು ರಾಜ್ಯ ಹೈಕೋರ್ಟ್ ಎನ್ಜಿಟಿಗೆ ವರ್ಗಾಯಿಸಿತ್ತು.