ಈಗ ಯುದ್ಧದ ಸ್ವರೂಪ ಬದಲಾಗಿದೆ, ಅದು ಬಾಹ್ಯಾಕಾಶವನ್ನು ತಲುಪಿದೆ. ಸೈಬರ್ ಕ್ಷೇತ್ರದ ಮೂಲಕವೂ ಯುದ್ಧ ನಡೆಯುತ್ತದೆ. ಆದ್ದರಿಂದ ರಕ್ಷಣಾ ಪಡೆಗಳ ಆಧುನೀಕರಣವು ನಮ್ಮ ಆದ್ಯತೆ ಮಾತ್ರವಲ್ಲ, ಅಗತ್ಯವೂ ಆಗಿದೆ. ಆಧುನೀಕರಣವೇ ನಮ್ಮ ಸೇನಾಪಡೆಗಳ ಹೆಗ್ಗುರುತಾಗಬೇಕು. ಇದನ್ನು ಮನಗಂಡು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ. ದಶಕಗಳಿಂದ ಪರಿಹಾರ ಕಾಣದೆ ಉಳಿದಿದ್ದ ಒಂದು ಹುದ್ದೆ ಒಂದು ಪಿಂಚಣಿ (ಒಆರ್ಒಪಿ) ಸಮಸ್ಯೆಯನ್ನು ನಾವು ಬಗೆಹರಿಸಿದೆವು, ಹುತಾತ್ಮರಾದವರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಹೆಚ್ಚಿಸುವ ತೀರ್ಮಾನವನ್ನೂ ಮಾಡಲಾಗಿದೆ ಎಂದರು.