ಕಿಶನ್ಗಂಗಾ, ರಾಟ್ಲೆ, ಪಕಲ್ ದುಲ್, ಮಿಯಾರ್ ಹಾಗೂ ಕಲ್ನೈ ಜಲವಿದ್ಯುತ್ ಘಟಕಗಳ ವಿನ್ಯಾಸದ ಕುರಿತು ಕಳವಳ ವ್ಯಕ್ತಪಡಿಸಿರುವ ಪಾಕಿಸ್ತಾನ, ಸಿಒಎ ರಚನೆ ಮಾಡಬೇಕು ಎಂದು 2016ರಲ್ಲಿ ವಿಶ್ವಬ್ಯಾಂಕ್ಗೆ ಮನವಿ ಮಾಡಿತ್ತು. ವಿಶ್ವಬ್ಯಾಂಕ್ ಈ ಮನವಿಯನ್ನು ಪುರಸ್ಕರಿಸಿರಲಿಲ್ಲ. ಪಾಕಿಸ್ತಾನದ ಬೇಡಿಕೆಗೆ ಪ್ರತಿಯಾಗಿ, ಈ ವಿಚಾರದಲ್ಲಿ ಪರಿಶೀಲಿಸಲು ತಟಸ್ಥ ರಾಷ್ಟ್ರಗಳ ತಜ್ಞರನ್ನು ನೇಮಿಸಬೇಕು ಎಂದು ಭಾರತ ಆಗ್ರಹಿಸಿತ್ತು.