ಘಟನೆ ಕುರಿತು ಮಾಹಿತಿ ನೀಡಿದ ಸೇಬು ಹಣ್ಣಿನ ತೋಟದ ಮಾಲೀಕ ಅಜಯ್ ರೈನಾ, ‘2 ದಿನದ ಹಿಂದಷ್ಟೇ ಕಾಶ್ಮೀರದಿಂದ ಜಮ್ಮುವಿಗೆ ಬಂದಿದ್ದೆ. ಈ ಸಂದರ್ಭದಲ್ಲಿ ಅನಂತ್ನಾಗ್ ಜಿಲ್ಲೆಯ ಅಕುರ ಹಳ್ಳಿಯಲ್ಲಿರುವ ನನ್ನಸೇಬು ಹಣ್ಣಿನ ತೋಟವನ್ನುಕಿಡಿಗೇಡಿಗಳುರಾತ್ರಿ ವೇಳೆ ಹಾನಿಗೊಳಿಸಿರುವ ಕುರಿತು ಮಾಹಿತಿ ಲಭಿಸಿತು’ ಎಂದರು.ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.