ಕಣಿವೆ ರಾಜ್ಯದ ಮಾಜಿ ಉಪ ಮುಖ್ಯಮಂತ್ರಿಯೂ ಆಗಿರುವ ಗುಪ್ತಾ ಅವರುಮಾಧ್ಯಮದವರೊಂದಿಗೆ ಮಾತನಾಡುತ್ತಾ, ‘ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಿದ್ದ ಕಾರಣಬಾಂಗ್ಲಾದೇಶ, ಅಫ್ಘಾನಿಸ್ತಾನ ಹಾಗೂ ಇನ್ನೂ ಕೆಲವು ದೇಶಗಳಲ್ಲಿ ಮದರಸಗಳನ್ನು ಮುಚ್ಚಲಾಗಿದೆ. ಕಾಶ್ಮೀರದಲ್ಲಿ ಭಯೋತ್ಪಾದನೆಯನ್ನು ಹರಡಲು ಸಹಕರಿಸಿದರೆ ಇಲ್ಲಿಯೂ ಮದರಸಗಳನ್ನ ನಿಷೇಧಿಸಲಾಗುವುದು. ಒಂದು ವೇಳೆ ಮೆಹಬೂಬಾ ಅವರು ಜಮಾತ್–ಇ–ಇಸ್ಲಾಮಿ ಸಂಘಟನೆ ಬೆಂಬಲಿಸಿದರೆ, ಅವರನ್ನೂ ಬಂಧಿಸಲೇಬೇಕು’ ಎಂದಿದ್ದರು.