ಶಬರಿಮಲೆ ದೇಗುಲವನ್ನು ಮಹಿಳೆಯರು ಪ್ರವೇಶಿಸಿದ್ದ ಕಾರಣಕ್ಕೆ ಸರಣಿ ಹರತಾಳಕ್ಕೆ ಸಾಕ್ಷಿಯಾಗಿದ್ದ ಕೇರಳ ರಾಜ್ಯವು ಹೈಕೋರ್ಟ್ ಆದೇಶದಿಂದ ನಿರಾಳಗೊಂಡಿದೆ. 2018ರಲ್ಲಿ ನಡೆದ ದಿಢೀರ್ ಹರತಾಳಗಳಿಂದ 97 ಕೆಲಸದ ದಿನಗಳು ನಷ್ಟವಾಗಿವೆ. ಕೈಗಾರಿಕೆ ಮತ್ತು ವಾಣಿಜ್ಯ ಉದ್ಯಮ ಇದರಿಂದ ಸಾಕಷ್ಟು ನಷ್ಟ ಅನುಭವಿಸಿವೆ. ಹಾಗಾಗಿ ರಾಜ್ಯದಲ್ಲಿ ದಿಢೀರ್ ಹರತಾಳ ನಿಷೇಧಿಸಬೇಕು ಎಂದು ಕೇರಳದ ವಾಣಿಜ್ಯ ಮಂಡಳಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೋರ್ಟ್ ಪರಿಗಣಿಸಿದ್ದು, ಈ ಆದೇಶ ಹೊರಡಿಸಿದೆ.