ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸುವಂತೆ ಸುಪ್ರೀಂಕೊರ್ಟ್ ಸೆಪ್ಟೆಂಬರ್ 28ರಂದು ತೀರ್ಪು ನೀಡಿದ ಬಳಿಕ ಕೇರಳದಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.ಎರಡು ತಿಂಗಳ ಅವಧಿಯ ಮಂಡಲ ಮಕರವಿಲಕ್ಕು ವಾರ್ಷಿಕ ಯಾತ್ರಾ ಋತು ನವೆಂಬರ್ 17ರಿಂದ ಆರಂಭವಾಗಿದ್ದು, ಸುಪ್ರೀಂ ತೀರ್ಪಿನ ಬಳಿಕ ಭಾರಿ ಕಟ್ಟೆಚ್ಚರದಲ್ಲಿ ಮೂರನೇ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗಿದೆ.