‘ಮಂಡ್ಯದಲ್ಲಿರುವ ತೋಟದಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಸಾಗುವಾನಿ ಮರಗಳನ್ನು ಕಡಿದು, ಸಾಗಣೆ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿದ್ದೆ. ಸಿಬಿಐ ವರದಿಯಂತೆ ತನಿಖೆ ನಡೆಸಿ, ಚಾರ್ಚ್ಶೀಟ್ ಸಹ ಸಲ್ಲಿಸಿದ್ದೆ. ಭ್ರಷ್ಟರ ವಿರುದ್ಧ ಕ್ರಮ ತೆಗೆದುಕೊಳ್ಳಬಾರದು ಎಂದು ಕೇಂದ್ರ ಸಚಿವ ಸದಾನಂದಗೌಡ ನನಗೆ ದೂರವಾಣಿ ಮೂಲಕ ಸೂಚನೆ ನೀಡಿದ್ದರು’ ಎಂದೂ ಆರೋಪಿಸಿದ್ದಾರೆ. ‘ಚಾರ್ಜ್ಶೀಟ್ ಹಿಂಪಡೆಯಬೇಕು. ಹೇಮಚಂದ್ರ ಎಂಬ ಅಧಿಕಾರಿಯ ಅಮಾನತು ತೆರವುಗೊಳಿಸುವಂತೆ ಅವರು ಮಾಡಿದ್ದ ಕೋರಿಕೆಯನ್ನು ನಾನು ತಿರಸ್ಕರಿಸಿದ್ದೆ’ ಎಂದೂ ಅವರು ಹೇಳಿದ್ದಾರೆ.