ತಿರುವನಂತಪುರ: ಕೇರಳದ ಎನ್ಡಿಎ ಮುಖಂಡ ತುಷಾರ್ ವೆಳ್ಳಾಪಳ್ಳಿ ವಿರುದ್ಧದ ಚೆಕ್ ಅಮಾನ್ಯ ಪ್ರಕರಣವನ್ನು ಯುನೈಟೆಡ್ ಅರಬ್ ಎಮಿರೆಟ್ಸ್ನ (ಯುಎಇ) ನ್ಯಾಯಾಲಯ ವಜಾಗೊಳಿಸಿದೆ.
ಭಾರತ್ ಧರ್ಮ ಜನ ಸೇನಾ (ಬಿಡಿಜೆಎಸ್) ಪಕ್ಷದ ಅಧ್ಯಕ್ಷರಾಗಿರುವ ತುಷಾರ್ ಅವರ ಪಾಸ್ಪೋರ್ಟ್ ಅನ್ನು ಅಜ್ಮಾನ್ನ ನ್ಯಾಯಾಲಯವು ಹಿಂದಿರುಗಿಸಿದೆ.
ಸಾಕ್ಷ್ಯಾಧಾರಗಳ ವಿಶ್ವಾಸಾರ್ಹತೆ ಕೊರತೆಯಿಂದ ನ್ಯಾಯಾಲಯ ಈ ಪ್ರಕರಣವನ್ನು ವಜಾಗೊಳಿಸಿದೆ.
ಆಗಸ್ಟ್ 22 ರಂದು ತುಷಾರ್ ಅವರನ್ನು ಅಜ್ಮಾನ್ನ ಪೊಲೀಸರು ಬಂಧಿಸಿದ್ದರು. ₹20 ಕೋಟಿಯ ಚೆಕ್ ನೀಡಿ ವಂಚಿಸಲಾಗಿದೆ ಎಂದು ಆರೋಪಿಸಿ ಕೇರಳ ಸಂಜಾತ ನಾಜಿಲ್ ಅಬ್ದುಲ್ಲಾ ಅವರು ತುಷಾರ್ ವಿರುದ್ಧ ದೂರು ನೀಡಿದ್ದರು.