ಹಲವು ವಾರಗಳ ಹಿಂದೆಯೇ ಆರೋಪಪಟ್ಟಿ ತಯಾರಿಸಲಾಗಿತ್ತು. ಪೊಲೀಸ್ ಪ್ರಧಾನ ಕಚೇರಿಯಿಂದ ಪರಿಶೀಲನೆ ಮತ್ತು ಅನುಮತಿಯ ಅಗತ್ಯವಿದ್ದ ಕಾರಣ ಕಡತ ಬಾಕಿ ಉಳಿದಿತ್ತು. ಚಾರ್ಚ್ಶೀಟ್ ಸಲ್ಲಿಕೆ ಮತ್ತಷ್ಟು ವಿಳಂಬವಾದರೆ, ಮತ್ತೊಮ್ಮೆ ಪ್ರತಿಭಟನೆ ನಡೆಸುವುದಾಗಿ ಕ್ರೈಸ್ತ ಸನ್ಯಾಸಿಗಳು ಬೆದರಿಕೆ ಹಾಕಿದ್ದರು. ಹಾಗಾಗಿ ಆರೋಪಪಟ್ಟಿ ಸಲ್ಲಿಕೆಯನ್ನು ತ್ವರಿತಗೊಳಿಸಲಾಯಿತು.