ಈ ಕಾರ್ಯಕರ್ತರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವ ಸಲುವಾಗಿ ಸಿಪಿಎಂ ಈಚೆಗೆ ಆಂಬೆಸರಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಆಯೋಜಿಸಿತ್ತು. ಪಂಚಾಯತ್ ಸಮಿತಿ ಸದಸ್ಯ ವಿಜಯ್ ನಾಗರೆ, ನಾಗಝರಿ ಗ್ರಾಮದ ಮಾಜಿ ಸರ್ಪಂಚ್ಗಳಾದ ವಸಂತ ವಾಸವಳ ಹಾಗೂ ಧುಲುರಾಮ್ ತಾಂಡೇಲ್ ಹಾಗೂ ಎರಡೂ ಗ್ರಾಮಗಳ ಅನೇಕ ಗ್ರಾಮ ಪಂಚಾಯತ್ ಸದಸ್ಯರು ಶಿವಸೇನಾ ತ್ಯಜಿಸಿ ಸಿಪಿಎಂ ಸೇರಿದರು.