‘ಸಾವೆ ಶಾರದಾ ಸಮಿತಿ ಕಾಶ್ಮೀರ’ದ ಸಂಸ್ಥಾಪಕ ರವೀಂದರ್ ಪಂಡಿತ್, ‘ಶಾರದಾ ಪೀಠವುಪ್ರಾಚೀನ ಧಾರ್ಮಿಕ ಕೇಂದ್ರವಾಗಿದೆ. ಅದು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ವ್ಯಾಪ್ತಿಗೆ ಸೇರಿದಾಗಿನಿಂದಲೂ, ಅಲ್ಲಿಗೆ ತೆರಳಲು ಯಾತ್ರಿಗಳಿಗೆ ವೀಸಾ ಸೌಲಭ್ಯ ಒದಗಿಸಿಕೊಡಬೇಕು ಎಂದು ನಾವು ಭಾರತ ಹಾಗೂ ಪಾಕಿಸ್ತಾನ ಸರ್ಕಾರಗಳನ್ನು ಆಗ್ರಹಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.