ಮರಣ ಪರಿಹಾರವನ್ನು ತ್ವರಿತಗತಿಯಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲುಪಿಸುವುದು ಎಲ್ಐಸಿಗೆ ಹುಟ್ಟುಗುಣವಾಗಿ ಬಂದಿದೆ. ಬರೀ ಎರಡು ದಿನಗಳೊಳಗೆ ಪರಿಹಾರ ತಲುಪಿಸುವ ಮೂಲಕ ಎಲ್ಐಸಿ ಗ್ರಾಹಕ ಹಿತಾಸಕ್ತಿ ಕೇಂದ್ರಿತ ವಿಮಾ ಸಂಸ್ಥೆ ಎನ್ನುವುದು ಪ್ರತಿಬಿಂಬಿತವಾಗಿದೆ. ಕರೀಂನಗರ ಬಸ್ ಅಪಘಾತ, ಮೈಸೂರು ಬಸ್ ಅಪಘಾತ ಮತ್ತು ಮೈಸೂರು ದೇವಸ್ಥಾನ ದುರಂತದ ಘಟನೆಗಳಲ್ಲೂ ಇದೇ ರೀತಿ ಎರಡು ದಿನಗಳೊಳಗೆ ಪರಿಹಾರ ತಲುಪಿಸಲಾಗಿತ್ತು ಎಂದು ಎಲ್ಐಸಿ ವಲಯ ವ್ಯವಸ್ಥಾಪಕ ಟಿ.ಸಿ.ಸುಶೀಲ್ ಕುಮಾರ್ ಹೇಳಿದ್ದಾರೆ.