ನಗರದ ತೀಲಾ ಜಮಲ್ಪುರಾ ಪ್ರದೇಶದಲ್ಲಿ ಯಕೃತ್ ಸಮಸ್ಯೆಯಿಂದ ಬಳಲುತ್ತಿದ್ದ 50 ವರ್ಷದ ಮಹಿಳೆಯೊಬ್ಬರು ಬುಧವಾರ ಸಾವಿಗೀಡಾಗಿದ್ದರು. ಆದರೆ, ಲಾಕ್ಡೌನ್ನಿಂದ ಮಹಿಳೆಯ ಸಂಬಂಧಿಕರು ಬರಲು ಸಾಧ್ಯವಾಗಲಿಲ್ಲ. ಆಗ, ಮಹಿಳೆಯ ಮನೆಯ ನೆರೆಹೊರೆಯಲ್ಲಿದ್ದ ಮುಸ್ಲಿಮರೇ ಅಂತ್ಯಸಂಸ್ಕಾರ ನಡೆಸಲು ಮುಂದಾಗಿ ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು.