‘ಗುರುಗ್ರಾಮಕ್ಕೆ ಶನಿವಾರ ಬೆಳಗ್ಗೆ 11.30ರ ಸುಮಾರಿಗೆ ಮಿಡತೆಗಳು ಧಾವಿಸಿ ಬಂದವು. ಸುಮಾರು ಎರಡು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಮಿಡತೆಗಳು ಆವರಿಸಿಕೊಂಡಿದ್ದವು. ದೆಹಲಿ–ಗುರುಗ್ರಾಮ ಗಡಿಯವರೆಗೆ ಮಿಡತೆಗಳಿದ್ದವು. ಆದರೆ, ದೆಹಲಿ ಪ್ರವೇಶಿಸಿಲ್ಲ’ ಎಂದು ಕೃಷಿ ಸಚಿವಾಲಯದ ಮಿಡತೆ ಎಚ್ಚರಿಕೆ ಸಂಸ್ಥೆಯ ಕೆ.ಎಲ್. ಗುರ್ಜಾರ್ ತಿಳಿಸಿದ್ದಾರೆ.