ಅವನು ಕಣ್ಣೂರಿನ ಏಳು ವರ್ಷದ ಬಾಲಕ ನಂದನ್. ರಾಹುಲ್ ಭೇಟಿ ಸಾಧ್ಯವಾಗದಿದ್ದಾಗ ಕಣ್ಣೀರು ಹಾಕಿದ್ದ. ತಂದೆಗೂ ಮಗನ ಸ್ಥಿತಿ ನೋಡಲಾಗಲಿಲ್ಲ. ಅವನು ಅಳುತ್ತಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡರು. ಇದು ವೈರಲ್ ಆಗಿದ್ದಷ್ಟೇ ಅಲ್ಲ, ರಾಹುಲ್ ಗಾಂಧಿ ಅವರನ್ನೂ ತಲುಪಿತು. ಮರುದಿನ ರಾಹುಲ್ ಕಡೆಯಿಂದ ಕರೆ ಬಂದಾಗ ಕುಟುಂಬಕ್ಕೆ ಅಚ್ಚರಿಯೋ ಅಚ್ಚರಿ.