ಮೇವು ಹಗರಣದಲ್ಲಿ 2013ರಲ್ಲಿ ಅವರಿಗೆ ಶಿಕ್ಷೆಯಾಯಿತು. ಹಾಗಾಗಿ ಅವರು ಚುನಾವಣೆಗೆ ಸ್ಪರ್ಧಿಸುವುದು ಸಾಧ್ಯವಿಲ್ಲದಾಯಿತು. ಹಾಗಿದ್ದರೂ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೆ ಅವರಿಗೆ ನಿಷೇಧ ಇರಲಿಲ್ಲ. ಹಾಗಾಗಿಯೇ 2014ರ ಲೋಕಸಭೆ ಮತ್ತು 2015ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಅವರು ಪ್ರಚಾರದ ಮುಂಚೂಣಿಯಲ್ಲಿದ್ದರು. ಹಾಸ್ಯ, ಚತುರೋಕ್ತಿಗಳಿಂದ ಲಾಲು ಜನಮನ ಗೆದ್ದರೂ 2014ರ ಚುನಾವಣೆಯಲ್ಲಿ ಅವರ ಪಕ್ಷಕ್ಕೆ ಭಾರಿ ಹಿನ್ನಡೆ ಆಗಿತ್ತು.ಆದರೆ, 2015ರ ವಿಧಾನಸಭೆ ಚುನಾವಣೆಯಲ್ಲಿ ಆರ್ಜೆಡಿ ಅತಿ ದೊಡ್ಡ ಪಕ್ಷವಾಗಿ ಮೂಡಿಬಂತು.