ರಾಷ್ಟ್ರೀಯತೆಯು ಬಿಜೆಪಿಯ ಚುನಾವಣಾ ತಂತ್ರ. ಸೀಟು ಹೊಂದಾಣಿಕೆಯೇ ಎಸ್ಪಿ, ಬಿಎಸ್ಪಿಯ ತಂತ್ರ. ಪ್ರಿಯಾಂಕಾ ಗಾಂಧಿ ಅವರನ್ನು ರಾಜಕೀಯಕ್ಕೆ ಕರೆತಂದಿದ್ದು ಕಾಂಗ್ರೆಸ್ನ ತಂತ್ರ. ಯಾರ ತಂತ್ರಗಾರಿಕೆ ಸರಿ ಎಂಬುದು ಮೇ 23ರಂದು ಗೊತ್ತಾಗಲಿದೆ
ಓಂಪ್ರಕಾಶ್ ರಾಜ್ಭರ್, ಸುಹಲ್ದೇವ್ ಭಾರತೀಯ ಸಮಾಜಪಕ್ಷದ ಮುಖ್ಯಸ್ಥ
ವ್ಹಾ ಮೋದಿ ಜೀ ವ್ಹಾ.. ಕಾಶ್ಮೀರಕ್ಕಾಗಿ ನೀವು ಏನೆಲ್ಲಾ ಮಾಡಿದ್ದೀರಿ. ನಿಮ್ಮ ಆಡಳಿತದ ಫಲವಾಗಿ ಅಲ್ಲಿ ಮೂರು ಹಂತಗಳ ಚುನಾವಣೆ ಘೋಷಣೆಯಾಗಿದೆ. ಒಂದು ಮತಕ್ಷೇತ್ರಕ್ಕೆ ಮೂರು ದಿನ, ಮೂರು ಹಂತಗಳಲ್ಲಿ ಚುನಾವಣೆ ನಡೆಯುವುದನ್ನು ಎಲ್ಲಿಯಾದರೂ ಕೇಳಿದ್ದೀರಾ?
ಅಸಾದುದ್ದೀನ್ ಒವೈಸಿ, ಎಐಎಂಐಎಂ ಅಧ್ಯಕ್ಷ
ಚಂದ್ರಬಾಬು ನಾಯ್ಡು ಅವರು ಗೊಂದಲದ ವ್ಯಕ್ತಿಯಾಗಿ ತೋರುತ್ತಿದ್ದಾರೆ. ಅವರು ತಮ್ಮ ರಾಜಕೀಯ ಜೀವನದ ಅಂತ್ಯದಲ್ಲಿದ್ದು, ಚುನಾವಣೆ ಬಳಿಕ ನಿರ್ಗಮನದ ದಾರಿ ಹಿಡಿಯಲಿದ್ದಾರೆ. ಆಂಧ್ರಪ್ರದೇಶದ ಜನರು ನಾಯ್ಡು ಅವರಿಗೆ ಸುದೀರ್ಘ ರಜೆ ನೀಡಲು ನಿರ್ಧರಿಸಿದ್ದಾರೆ