ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದೂ ವ್ಯಕ್ತಿಯ ಶವಸಂಸ್ಕಾರಕ್ಕೆ ಮುಸ್ಲಿಂ ಯುವಕರ ಸಾಥ್‌

Last Updated 30 ಮಾರ್ಚ್ 2018, 7:23 IST
ಅಕ್ಷರ ಗಾತ್ರ

ಬಾಳೆಹೊನ್ನೂರು: ಪಟ್ಟಣ ಸಮೀಪದ ಅಕ್ಷರನಗರದಲ್ಲಿ ಮೃತರಾದ ಹಿಂದೂ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದಲ್ಲಿ ಮುಸ್ಲಿಂ ಯುವಕರು ಭಾಗಿಯಾಗಿ ಸೌಹಾರ್ದತೆ ಮೆರೆದಿದ್ದಾರೆ. ‌

ಅಕ್ಷರನಗರದ ನಿವಾಸಿ ರಾಮಕೃಷ್ಣನ್ (75) ಬುಧವಾರ ಮನೆಯಲ್ಲಿ ನಿಧನರಾದರು. ಬೆಳಿಗ್ಗೆ ವೇಳೆ ನಿಧನರಾದ ಕಾರಣ ಆ ವೇಳೆಗಾಗಲೇ ಅಕ್ಷರನಗರದ ಬಹುತೇಕ ಜನರು ತಮ್ಮ ತಮ್ಮ ಕೆಲಸಗಳಿಗೆ ತೆರಳಿದ್ದರು. ತಮಿಳು ಜನಾಂಗಕ್ಕೆ ಸೇರಿದ್ದ ಅವರಿಗೆ ಹೆಣ್ಣು ಮಕ್ಕಳಿದ್ದ ಕಾರಣ ಅಂತ್ಯಸಂಸ್ಕಾರದ ಕಾರ್ಯಗಳನ್ನು ನೆರವೇರಿಸುವುದು ತೊಡಕಾಗಿತ್ತು.

ವಿಷಯ ತಿಳಿದ ಆ ಭಾಗದ ಬಿ. ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಅರ್ಮುಗಂ, ದೊರೆಸ್ವಾಮಿ, ಭಾಸ್ಕರ್ ಹಾಗೂ ಮುಸ್ಲಿಂ ಯುವಕರು ರಂಗಸ್ವಾಮಿಯ ಕುಟುಂ ಬದವರೊಂದಿಗೆ ಸೇರಿ ಅಂತ್ಯಸಂಸ್ಕಾರ ನಡೆಸಲು ಮುಂದಾದರು. ಅಕ್ಷರನಗರ ಸುತ್ತಮುತ್ತಲಿನ ಮುಸ್ಲಿಂ ಸಮುದಾಯದ ಆರೀಫ್, ಮಹಮ್ಮದ್, ಸೈಯದ್, ಜಬ್ಬಾರ್, ಶಫೀಖ್, ಸಿದ್ದೀಕ್, ಸಲಾಂ, ನಾಸೀರ್ ಹುಸೇನ್, ಮಹಮ್ಮದ್, ಅಶ್ರಫ್ ಮತ್ತಿತರರು ಹಿಂದೂ ರುದ್ರಭೂಮಿಗೆ ತೆರಳಿ, ಗುಂಡಿ ತೋಡಿ ಅಂತ್ಯ ಸಂಸ್ಕಾರಕ್ಕೆ ಕೈಜೋಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT