‘ಒಬ್ಬ ವ್ಯಕ್ತಿಯನ್ನು ಗುಂಪೊಂದು ಹೊಡೆದು ಕೊಲ್ಲುವುದನ್ನು ಗುಂಪುಹತ್ಯೆ ಎನ್ನಲಾಗುತ್ತದೆ. ಇದು ಯಾವುದೇ ಸಂಸ್ಕೃತಿಗೆ ಸೇರಿದ್ದು ಅಲ್ಲ. ಆದರೆ ದೇಶದಲ್ಲಿ ಗುಂಪುಹತ್ಯೆಗಳು ನಡೆದೇ ಇಲ್ಲ ಎಂಬಂತೆ ಭಾಗವತ್ ಮಾತನಾಡಿದ್ದಾರೆ. ಗೋರಕ್ಷಕರಿಂದ ಗುಂಪುಹಲ್ಲೆ–ಹತ್ಯೆಗಳಿಗೆ ಧಾರ್ಮಿಕ ಅಲ್ಪಸಂಖ್ಯಾತರು ಬಲಿಯಾಗುತ್ತಿದ್ದಾರೆ ಎಂಬ ಕನಿಷ್ಠ ಜ್ಞಾನವೂ ಭಾಗವತ್ಗೆ ಇಲ್ಲ. ಅಲ್ಪಸಂಖ್ಯಾತರನ್ನು ಅಲ್ಪಸಂಖ್ಯಾತರು ಎಂದು ಕರೆಯುವ ಸೌಜನ್ಯವೂ ಅವರಿಗಿಲ್ಲ’ ಎಂದು ಸಿಪಿಎಂಟೀಕಿಸಿದೆ.