ಯಾದಗಿರಿ ತಾಲ್ಲೂಕು ಪಂಚಾಯಿತಿ ಇಒ ಬಿ.ಎಸ್.ರಾಥೋಡ ಮಾತನಾಡಿ,‘ಮತದಾನದ ಬಗ್ಗೆ ಅರಿವು ಮೂಡಿಸಲು ಎಲ್ಲ ಗ್ರಾಮಗಳಲ್ಲಿ, ಹಾಡುಹಸೆ, ಜಾಥಾಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ನಿಮ್ಮ ಮತ- ನಿಮ್ಮ ಭವಿಷ್ಯವಾಗಿದೆ. ಆದ್ದರಿಂದ ಯಾವೊಬ್ಬ ಮತದಾರನು ಮತ ಚಲಾವಣೆಯಿಂದ ವಂಚಿತರಾಗದಂತೆ ಕಡ್ಡಾಯವಾಗಿ ಮತ ಚಲಾಯಿಸಬೇಕು’ ಎಂದು ಸಲಹೆ ನೀಡಿದರು.