ಜಬಲ್ಪುರ: ಇತರೆ ಹಿಂದುಳಿದ ವರ್ಗದವರಿಗೆ(ಒಬಿಸಿ) ನೀಡುತ್ತಿರುವ ಮೀಸಲಾತಿಯನ್ನು ಶೇ 14ರಿಂದ 27ಕ್ಕೆ ಹೆಚ್ಚಿಸಿ ಮಧ್ಯಪ್ರದೇಶ ಸರ್ಕಾರ ಹೊರಡಿಸಿದ್ದ ಸುಗ್ರೀವಾಜ್ಞೆಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ರಾಜ್ಯ ಸರ್ಕಾರ ಇದೇ 8ರಂದು ಈ ಸಂಬಂಧ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಆರ್.ಎಸ್.ಝಾ ಮತ್ತು ಸಂಜಯ್ ದ್ವಿವೇದಿ ಅವರನ್ನು ಒಳಗೊಂಡ ಪೀಠ, ತಡೆಯಾಜ್ಞೆ ನೀಡಿತು.