ಹಾವೇರಿಯ ಮಲ್ಲೇಶಪ್ಪ ಕಲ್ಲಪ್ಪ ತಳವಾರ ಮಾತನಾಡಿ, ‘ಸರ್ಕಾರ ನನಗೆ ಕೃಷಿ ಹೊಂಡ ನಿರ್ಮಿಸಿಕೊಟ್ಟಿದ್ದು, ನೀರಿನ ಸಮಸ್ಯೆ ಕಡಿಮೆಯಾಗಿದೆ. ಆದರೆ, ನಾವು ಬೆಳೆದ ಬೆಳೆಗಳನ್ನು ನಮ್ಮ ಜಿಲ್ಲೆಯಲ್ಲಿಯೇ ಮಾರಾಟ ಮಾಡಲು ಸರ್ಕಾರ ಮಾರುಕಟ್ಟೆ ನಿರ್ಮಿಸಬೇಕು. ರೈತರನ್ನು ಕಡೆಗಣಿಸಿರುವ ಸರ್ಕಾರ
ಗಳು ಹಸಿವು ಮುಕ್ತ ಭಾರತ ಮಾಡಲು ಹೊರಟಿವೆ. ದೇಶದ ಹಸಿವು ನೀಗಿಸಲು ನಾವು ಸಿದ್ಧವಿದ್ದೇವೆ. ಆದರೆ ನಮಗೆ ಉತ್ತಮ ಬೀಜ, ನೀರು ಹಾಗೂ ವಿದ್ಯುತ್ ಸೌಲಭ್ಯ ಮಾಡಿಕೊಟ್ಟರೆ ಸಾಕು’ ಎಂದರು.