ಅಧಿಕಾರ ಹಂಚಿಕೆ ಕುರಿತಂತೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎನ್ಸಿಪಿ ರಾಜ್ಯ ಘಟಕದ ಮುಖ್ಯಸ್ಥ ಪಾಟೀಲ್ ತಿಳಿಸಿದರು. ‘ಸೇನಾ ಎದುರು ಯಾವುದೇ ಷರತ್ತುಗಳನ್ನು ಹಾಕಿಲ್ಲ. ಆಡಳಿತದ ಕಾರ್ಯಸೂಚಿ ನಿರ್ಧರಿಸುವ ಕೆಲಸದಲ್ಲಿ ತೊಡಗಿದ್ದೇವೆ. ಶಿವಸೇನಾ ಸಂಸದ ಅರವಿಂದ್ ಸಾವಂತ್ ಅವರು ಕೇಂದ್ರ ಸಂಪುಟದಿಂದ ಹೊರಬಂದಿದ್ದು, ಇದು ಎನ್ಡಿಎ ಮೈತ್ರಿಕೂಟದಿಂದ ಶಿವಸೇನಾ ಅಧಿಕೃತವಾಗಿ ಹೊರಬಂದಿದೆ ಎಂಬುದರ ಸೂಚಕವೆಂದು ನಾವು ಭಾವಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.