ಈ ಕುರಿತು ಫೇಸ್ಬುಕ್ಪೋಸ್ಟ್ ನಲ್ಲಿ ಬರೆದಿರುವ ಅವರು, ಬಾಳಾಸಾಹೇಬ್ ಠಾಕ್ರೆ ಅವರನ್ನು ನಾನು ಗೌರವಿಸುತ್ತೇನೆ ಮತ್ತು ಒಂದು ವೇಳೆ ಶಿವಸೇನೆಯ ಸಂಸ್ಥಾಪಕ ಇಂದು ಬದುಕಿದ್ದರೆ, ಬಿಜೆಪಿಯು ಇಂದು ಇದೇ ಧೈರ್ಯತೋರಿಸುತ್ತಿತ್ತೇ ಎಂದು ಪ್ರಶ್ನಿಸಿದ್ದಾರೆ.ಮಹಾರಾಷ್ಟ್ರವು ಜನರಿಂದ ಗೌರವವನ್ನು ಸಂಪಾದಿಸಿದಂತ ಹಲವು ನಾಯಕರಿಂದ ಆಶೀರ್ವದಿಸಲ್ಪಟ್ಟಿದೆ. ಅಂತರವರಲ್ಲಿ ಗೌರವಾನ್ವಿತ ಬಾಳಾಸಾಹೇಬ್ ಠಾಕ್ರೆ ಕೂಡ ಒಬ್ಬರು. ಅವರನ್ನು ನಾನು ಗೌರವಿಸಲು ಹಲವು ಕಾರಣಗಳಿವೆ. ಅವುಗಳಲ್ಲಿ ರಾಷ್ಟ್ರ ರಾಜಕೀಯದಲ್ಲಿ ಅವರಿಗಿದ್ದ ಘನತೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದ್ದಾರೆ.