‘ನ್ಯಾಯ್ ಆಪ್ಕೆ ದ್ವಾರ್’ ಶಿಬಿರದಲ್ಲಿ ಕಮಲ್ಪುರ ಗ್ರಾಮದ ಪ್ರಕಾಶ್ ಎಂಬುವವರು ತೋಡಾಭೀಮ್ ಉಪವಿಭಾಗಾಧಿಕಾರಿ ಜಗದೀಶ್ ಆರ್ಯ ಅವರೊಂದಿಗೆ ತಮ್ಮೂರಿನ ರಸ್ತೆ ಸಮಸ್ಯೆ ಕುರಿತು ವಾಗ್ವಾದ ನಡೆಸಿದರು. ಇಬ್ಬರ ನಡುವಿನ ಮಾತಿನ ಚಕಮಕಿ ತಾರಕಕ್ಕೆ ಏರಿದಾಗ, ಅಧಿಕಾರಿಗಳು ಗ್ರಾಮಸ್ಥನನ್ನು ಎಳೆದಾಡಿ, ಹೊಡೆದು ಹೊರಗೆ ತಳ್ಳಿದ ದೃಶ್ಯವನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.