ಮಮತಾ ಹೇಳಿದ್ದು...:ಕೂಚ್ ಬೆಹಾರ್ನಲ್ಲಿ ರ್ಯಾಲಿಯೊಂದರಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ‘ಹಿಂದುಗಳಲ್ಲಿರುವಂತೆಯೇ ಅಲ್ಪಸಂಖ್ಯಾತರಲ್ಲಿಯೂ ತೀವ್ರವಾದ ಹೊರಹೊಮ್ಮುತ್ತಿದೆ. ರಾಜಕೀಯ ಪಕ್ಷವೊಂದು ಬಿಜೆಪಿಯಿಂದ ಹಣ ಪಡೆದು ಈ ಕೃತ್ಯಕ್ಕೆ ಕುಮ್ಮಕ್ಕು ನೀಡುತ್ತಿದೆ. ಆ ಪಕ್ಷ ಪಶ್ಚಿಮ ಬಂಗಾಳದ್ದಲ್ಲ. ಹೈದರಾಬಾದ್ನದ್ದು’ ಎಂದು ಹೇಳಿದ್ದಾರೆ. ಅಕ್ರಮ ವಲಸೆ ಸಮಸ್ಯೆ ಹೆಚ್ಚಿರುವ, ಬಾಂಗ್ಲಾದೇಶದ ಗಡಿಗೆ ಸಮೀಪದಲ್ಲಿರುವ ಪ್ರದೇಶದಲ್ಲಿ ಮಮತಾ ಅವರು ಈ ಹೇಳಿಕೆ ನೀಡಿದ್ದಾರೆ. ಆದರೆ, ಓವೈಸಿ ಹೆಸರನ್ನು ನೇರವಾಗಿ ಉಲ್ಲೇಖಿಸಿಲ್ಲ.