ಕೋಲ್ಕತ್ತ: ಜೂನ್ 15ರಂದು ನಡೆಯಲಿರುವ ‘ನೀತಿ ಆಯೋಗ’ದ ಸಭೆಗೆ ಹಾಜರಾಗದಿರಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀರ್ಮಾನಿಸಿದ್ದಾರೆ.
ಈ ಬಗ್ಗೆ ಪ್ರಧಾನಿಗೆ ಪತ್ರ ಬರೆದಿರುವ ಮಮತಾ, ‘ರಾಜ್ಯಗಳಿಗೆ ಹಣಕಾಸು ನೆರವು ಒದಗಿಸುವ ಅಧಿಕಾರ ನೀತಿ ಆಯೋಗಕ್ಕೆ ಇಲ್ಲದಿರುವುದರಿಂದ ಇಂಥ ಸಭೆಯಲ್ಲಿ ಪಾಲ್ಗೊಳ್ಳುವುದು ಅರ್ಥಹೀನ’ ಎಂದಿದ್ದಾರೆ.
ಯೋಜನಾ ಆಯೋಗವನ್ನು ರದ್ದುಮಾಡಿ, ನೀತಿ ಆಯೋಗ ರಚಿಸುವ ಎನ್ಡಿಎ ಸರ್ಕಾರದ ತೀರ್ಮಾನವನ್ನು ಮಮತಾ ಅವರು ಹಿಂದೆಯೇ ವಿರೋಧಿಸಿದ್ದರು. ಈ ಹಿಂದೆಯೂ ಅವರು ನೀತಿ ಆಯೋಗದ ಸಭೆಯಲ್ಲಿ ಪಾಲ್ಗೊಳ್ಳುವುದನ್ನು ತಪ್ಪಿಸಿಕೊಂಡಿದ್ದರು.