ಕೂಚ್ ಬಿಹಾರ್ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷದ ರ್ಯಾಲಿಯಲ್ಲಿ ಮಾತನಾಡಿದ ಮಮತಾ, ‘ಕೆಲವರು ಚೌಕೀದಾರ ಕಳ್ಳ ಎಂದು ಹೇಳುತ್ತಾರೆ. ಚೌಕೀದಾರ ಸುಳ್ಳುಗಾರ ಎಂದು ನಾನು ಹೇಳುತ್ತೇನೆ. ಅವರು ತಮ್ಮ ಜೀವನದಲ್ಲಿ ಎಂದೂ ಸತ್ಯ ನುಡಿದಿಲ್ಲ’ ಎಂದಿದ್ದಾರೆ. ವಿದೇಶದ ಕಪ್ಪುಹಣ ವಾಪಸ್ ತರುವ ಹಾಗೂ ಎಲ್ಲರ ಖಾತೆಗಳೂ ₹15 ಲಕ್ಷ ಹಣ ಠೇವಣಿ ಇಡುವ ಮೋದಿ ಅವರ ಮಾತುಗಳನ್ನು ಉಲ್ಲೇಖಿಸಿದ ಮಮತಾ, ಮತ ಪಡೆಯುವ ಏಕೈಕ ಉದ್ದೇಶದಿಂದ ಅವರು ಜನರನ್ನು ವಂಚಿಸಿದ್ದಾರೆ ಎಂದು ಆರೋಪಿಸಿದ್ದಾರೆ.