ರಾಜೇಶ್ ಅರ್ಧ ಮೀಸೆ ಬೋಳಿಸಿರುವುದನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ನಾಯಕರನ್ನು ಟ್ರೋಲ್ ಮಾಡಲಾಗಿದೆ. ‘ಮಾತು ಉಳಿಸಿದ ವ್ಯಕ್ತಿ. ಮೋದಿ ಅವರು ಇವರಿಂದ ಕಲಿಯಬೇಕು’ ಎಂದು ಅನಿರುದ್ಧ್ ಸಿಖ್ದಾರ್ ಎಂಬುವವರು ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಜತೆಗೆ, ‘ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದರೆ ಅರ್ಧ ಮೀಸೆ ತೆಗೆಸುತ್ತೇನೆ ಎಂದು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ ಆರ್ಎಸ್ಎಸ್ ಕಾರ್ಯಕರ್ತ ರಾಜೇಶ್ ಕುರುಪ್. ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಬಿಜೆಪಿ, ಆರ್ಎಸ್ಎಸ್ನ ಎಲ್ಲ ಕಾರ್ಯಕರ್ತರು ತಾವಾಡಿದ ಮಾತಿನಂತೆಯೇ ನಡೆದರೆ ಬಹಳ ಉತ್ತಮ‘ ಎಂದು ಬರೆದುಕೊಂಡಿದ್ದಾರೆ.