ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪತ್ರಕರ್ತ ರಾಧಾಕೃಷ್ಣನ್‌ ನಾಯರ್‌ ನಿಧನ

Last Updated 27 ನವೆಂಬರ್ 2018, 6:13 IST
ಅಕ್ಷರ ಗಾತ್ರ

ನವದೆಹಲಿ: ಸಿಎನ್‌ಎನ್‌–ನ್ಯೂಸ್‌18 ಸಂಸ್ಥೆಯ ವ್ಯವಸ್ಥಾಪಕ ಸಂಪಾದಕ ರಾಧಾಕೃಷ್ಣನ್‌ ನಾಯರ್‌ (54) ಅವರು ಮಂಗಳವಾರ ಬೆಳಿಗ್ಗೆ ನಿಧನರಾದರು.

ಕೇರಳದವರಾದ ನಾಯರ್‌ ಅವರು ಉದ್ಯೋಗದಲ್ಲಿ ಹೆಚ್ಚಿನ ಅವಕಾಶ ಅರಸಿ ದೆಹಲಿಗೆ ಪ್ರಯಾಣ ಬೆಳೆಸಿದರು.ವಿದ್ಯುನ್ಮಾನ ಮಾಧ್ಯಮಕ್ಕೆ ಬರುವಮುನ್ನ ನಾಯರ್‌ ಅವರು ಯುನೈಟೆಡ್‌ ನ್ಯೂಸ್‌ ಆಫ್‌ ಇಂಡಿಯಾದಲ್ಲಿ (ಯುಎನ್‌ಐ) ಕೆಲ ವರ್ಷ ಕೆಲಸ ಮಾಡಿದ್ದರು.

ಟಿವಿ18 ನಿರ್ಮಾಣದ ‘ಇಂಡಿಯಾ ಬ್ಯುಸಿನೆಸ್‌ ರಿಪೋರ್ಟ್‌’ಕಾರ್ಯಕ್ರಮದ ನಿರ್ವಾಹಕರಾಗಿದ್ದರು. ಈ ಕಾರ್ಯಕ್ರಮ ಬಿಬಿಸಿ ಇಂಡಿಯಾದಲ್ಲಿ ಪ್ರಸಾರವಾಗುತ್ತಿತ್ತು.ಜೊತೆಗೆ ಸೋನಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ಕಾನೂನು ವಿಷಯಗಳಿಗೆ ಸಂಬಂಧಿಸಿದ‘ಭಂವಾರ್’ಧಾರಾವಾಹಿಯಬರವಣಿಗೆ ಮತ್ತು ಸಂಶೋಧನೆಯಲ್ಲಿ ನೆರವಾಗಿದ್ದರು.

ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಪತ್ರಕರ್ತರು ಮತ್ತು ರಾಜಕೀಯ ಮುಖಂಡರು ಇವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT