ನವದೆಹಲಿ: ಬಿಹಾರದಲ್ಲಿ ಅಕ್ಯೂಟ್ ಎನ್ಸೆಫಾಲಿಟೆಸ್ ಸಿಂಡ್ರೊಮ್ (ಎಇಎಸ್ ) ಬಾಧಿಸಿ 120ಕ್ಕೂ ಹೆಚ್ಚು ಮಕ್ಕಳು ಸಾವಿಗೀಡಾಗಿದ್ದಾರೆ.
ರಾಜ್ಯದಲ್ಲಿರುವ ಮಹಾಮಾರಿ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಭಾನುವಾರ ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್, ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವ ಅಶ್ವಿನ್ ಕುಮಾರ್ ಚೌಬೆ ಮತ್ತು ಬಿಹಾರದ ಆರೋಗ್ಯ ಸಚಿವ ಮಂಗಲ್ ಪಾಂಡೆ ಸಭೆ ಸೇರಿದ್ದರು.ಗಂಭೀರ ವಿಷಯದ ಚರ್ಚೆ ನಡೆಯುತ್ತಿದ್ದ ವೇಳೆ ಮಂಗಲ್ ಪಾಂಡೆ ಎಷ್ಟು ವಿಕೆಟ್ ಹೋಯ್ತು? ಎಂದು ಕೇಳಿದ್ದಾರೆ. ಆಗ ಆ ಕಡೆಯಿಂದ ನಾಲ್ಕು ವಿಕೆಟ್ ಹೋಯ್ತು ಎಂಬ ಉತ್ತರ ಬಂದಿದೆ.