ರಾಜ್ಯಸಭೆ ಸದಸ್ಯ ಮದನ್ಲಾಲ್ ಸೈನಿ ಅವರು ನಿಧನರಾಗಿದ್ದರಿಂದ ಈ ಸ್ಥಾನಕ್ಕೆ ಉಪ ಚುನಾವಣೆ ನಡೆದಿತ್ತು. ಮನಮೋಹನ್ ಸಿಂಗ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದರು. ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ನಾಮಪತ್ರ ಹಿಂತೆಗೆಯುವ ಅವಧಿ ಮುಗಿದ ನಂತರ ವಿಧಾನಸಭೆ ಕಾರ್ಯದರ್ಶಿ ಮತ್ತು ಚುನಾವಣಾಧಿಕಾರಿ ಪ್ರಮಿಲ್ ಕುಮಾರ್ ಮಾಥೂರ್ ಅವರು ಸಿಂಗ್ ಆಯ್ಕೆಯನ್ನು ಸೋಮವಾರ ಘೋಷಿಸಿದರು.