ಚೆನ್ನೈ: ರಾಜ್ಯಸಭೆಗೆ ತಮಿಳುನಾಡಿನಿಂದ ಇದೇ 18ರಂದು ನಡೆಯಲಿರುವ ಚುನಾವಣೆಗೆ ವಕೀಲ ಪಿ. ವಿಲ್ಸನ್ ಮತ್ತು ಕಾರ್ಮಿಕ ಮುಖಂಡ ಎಂ. ಷಣ್ಮುಗಂ ಅವರನ್ನು ಡಿಎಂಕೆ ಆಯ್ಕೆ ಮಾಡಿದೆ. ‘ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮಿಳುನಾಡಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು ಕಾಂಗ್ರೆಸ್ ಬಯಸಿದೆ. ಇದಕ್ಕಾಗಿ ಡಿಎಂಕೆ ಜತೆಗೆ ಮಾತುಕತೆಯನ್ನೂ ನಡೆಸಿದೆ’ ಎಂಬ ಸುದ್ದಿಗಳು ಇತ್ತೀಚೆಗೆ ಹರಿದಾಡಿದ್ದವು. ಆದರೆ, ಅವು ಈಗ ಸುಳ್ಳಾಗಿವೆ. ಮನಮೋಹನ್ ಅವರ ರಾಜ್ಯಸಭೆ ಸದಸ್ಯತ್ವದ ಅವಧಿ ಕಳೆದ ತಿಂಗಳು ಕೊನೆಗೊಂಡಿತ್ತು. ಸತತ 28 ವರ್ಷ ಅವರು ರಾಜ್ಯಸಭೆಯ ಸದಸ್ಯರಾಗಿದ್ದರು.