ದುಷ್ಯಂತ್ ಚೌಟಾಲಾ ಅವರು ಉಪ ಮುಖ್ಯಮಂತ್ರಿಯಾದ ಕುರಿತು ಮಾತನಾಡಿರುವ ಅವರ ತಂದೆ ಅಜಯ್ ಚೌಟಾಲಾ, ‘ ಒಬ್ಬ ತಂದೆಗೆ ಖುಷಿ ಕೊಡುವಂಥ ಸನ್ನಿವೇಶ ಇದಕ್ಕಿಂತಲೂ ಮಿಗಿಲಾದದ್ದು ಯಾವುದಾದರೂ ಇದೆಯೇ? ಇದಕ್ಕಿಂತಲೂ ಹೆಚ್ಚು ಸಂತೋಷ ಕೊಡುವ ದೀಪಾವಳಿ ನನಗೆ ಇನ್ನೊಂದಿಲ್ಲ. ಈ ಸರ್ಕಾರ ಐದು ವರ್ಷ ಸದೃಢವಾಗಿ ನಡೆಯುತ್ತದೆ. ಹರಿಯಾಣದ ಅಭಿವೃದ್ಧಿಗೆ ದುಡಿಯಲಿದೆ,’ ಎಂದು ಹೇಳಿದ್ದಾರೆ.