ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗದು ರೂಪದ ನೆರವಿನೊಂದಿಗೆ ದವಸ ಧಾನ್ಯಗಳನ್ನು ಸಹ ಕಳುಹಿಸಲಾಗುತ್ತಿದೆ. ವಾಸ್ತವ ಪರಿಸ್ಥಿತಿ ವೀಕ್ಷಿಸಲು ಭಕ್ತರ ತಂಡವು ತೆರಳಿದ್ದು, ತಂಡದ ವರದಿ ಆಧರಿಸಿ ನಿರಾಶ್ರಿತರಾದ ಕಡು ಬಡವರಿಗೆ ಇನ್ನೂ ಹೆಚ್ಚಿನ ನೆರವು ಒದಗಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.