ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯ ಮಠದಿಂದ ಕೇರಳ, ಕೊಡಗಿಗೆ ತಲಾ ₹15 ಲಕ್ಷ ನೆರವು

Last Updated 23 ಆಗಸ್ಟ್ 2018, 7:17 IST
ಅಕ್ಷರ ಗಾತ್ರ

ರಾಯಚೂರು: ನೆರೆಯಿಂದ ಬಳಲುತ್ತಿರುವ ಕೇರಳ ಮತ್ತು ಕೊಡಗು ಜನರ ನೆರವಿಗಾಗಿ ತಾತ್ಕಾಲಿಕ ಪರಿಹಾರ ರೂಪದಲ್ಲಿ ₹15 ಲಕ್ಷ ಹಣವನ್ನು ನೀಡಲಾಗುವುದು ಎಂದು ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಗದು ರೂಪದ ನೆರವಿನೊಂದಿಗೆ ದವಸ ಧಾನ್ಯಗಳನ್ನು ಸಹ ಕಳುಹಿಸಲಾಗುತ್ತಿದೆ.‌ ವಾಸ್ತವ ಪರಿಸ್ಥಿತಿ ವೀಕ್ಷಿಸಲು ಭಕ್ತರ ತಂಡವು ತೆರಳಿದ್ದು, ತಂಡದ ವರದಿ ಆಧರಿಸಿ ನಿರಾಶ್ರಿತರಾದ ಕಡು ಬಡವರಿಗೆ ಇನ್ನೂ ಹೆಚ್ಚಿನ ನೆರವು ಒದಗಿಸುವ ವ್ಯವಸ್ಥೆ ಮಾಡಲಾಗುವುದು’ ಎಂದು ತಿಳಿಸಿದರು.

ನೆರೆ ಕಾರಣದಿಂದ ಈ ಸಲ ಆಗಸ್ಟ್ 25 ರಿಂದ ಆರಂಭವಾಗುವ ರಾಯರ ಆರಾಧನೆಯಲ್ಲಿ ಅನಗತ್ಯ ದುಂದುವೆಚ್ಚ ಕೈಬಿಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT