ಪ್ರಕರಣ ಕುರಿತು ಎನ್.ವಿ. ರಮಣ್ಹಾಗೂ ಎಂ. ಶಾಂತಣ್ಣಗೌಡರ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು.
‘ವಿಗ್ರಹ ಆರಾಧಕರಾದ ಹಿಂದೂ ಮಹಿಳೆ, ವಿಗ್ರಹ ಆರಾಧಕರಲ್ಲದ ಮುಸ್ಲಿಂ ವ್ಯಕ್ತಿಯನ್ನು ವಿವಾಹ ಆಗುವುದು ಅಸಿಂಧುವಾಗಿತ್ತದೆ. ಅಂತಹ ಪ್ರಕರಣಗಳಲ್ಲಿ ಪತಿಯ ಆಸ್ತಿಯಲ್ಲಿ ಪತ್ನಿ ಪಾಲು ಪಡೆಯಲು ಅವಕಾಶವಿರುವುದಿಲ್ಲ. ಬದಲಾಗಿ ಅವರಿಗೆ ಜನಿಸಿದ ಮಕ್ಕಳಿಗೆ ತಂದೆ ಆಸ್ತಿಯನ್ನು ಆನುವಂಶಿಕವಾಗಿ ಪಡೆಯುವ ಅರ್ಹತೆ ಇರುತ್ತದೆ’ ಎಂದುಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಹೇಳಿರುವುದನ್ನುನ್ಯಾಯಪೀಠ ಉಲ್ಲೇಖಿಸಿದೆ.