‘ಗೋರಖ್ಪುರ ಹಾಗೂ ಮಹಾರಾಜ್ಗಂಜ್ ಕ್ಷೇತ್ರಗಳನ್ನು ನಮಗೆ ಬಿಟ್ಟುಕೊಡುವುದಾಗಿ ಅಖಿಲೇಶ್ ಭರವಸೆ ಕೊಟ್ಟಿದ್ದರು. ಆದರೆ ನಂತರ ನಮಗೆ ಒಂದು ಕ್ಷೇತ್ರವನ್ನು ಮಾತ್ರ ಬಿಟ್ಟುಕೊಟ್ಟು ಎಸ್ಪಿ ಚಿಹ್ನೆಯಲ್ಲಿಯೇ ಸ್ಪರ್ಧಿಸುವಂತೆ ಸೂಚಿಸಿದ್ದರು. ಮಾಯಾವತಿ ಅವರ ಸೂಚನೆ ಪಾಲಿಸುವ ಅಖಿಲೇಶ್ ನಮಗೆ ಮೋಸ ಮಾಡಿದ್ದಾರೆ. ನಾವು ನಮ್ಮ ಪಕ್ಷದ ಚಿಹ್ನೆಯ ಅಡಿಯಲ್ಲೇ ಸ್ಪರ್ಧಿಸಲು ಇಚ್ಛಿಸುತ್ತೇವೆ. ಆ ಕಾರಣಕ್ಕೆ ಮೈತ್ರಿಯಿಂದ ಹೊರಬರಲು ನಿರ್ಧರಿಸಿದೆವು’ ಎಂದು ಸಂಜಯ್ ಹೇಳಿದರು.