ಶ್ರೀನಗರ:ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಶಾರದ ಪೀಠ ದೇಗುಲವನ್ನ ಕಾಶ್ಮೀರಿ ಪಂಡಿತರಿಗೆ ಪ್ರವೇಶಿಸಲುಅನುವು ಮಾಡಿದರೆ, ಪ್ರಸ್ತುತ ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಉದ್ವಿಗ್ನ ಪರಿಸ್ಥಿತಿಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಬಹುದು ಎಂದು ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿಹೇಳಿಕೆ ನೀಡಿದ್ದಾರೆ
ಶಾರದ ಪೀಠ ದೇಗುಲದ ದಾರಿಯನ್ನು ಕಾಶ್ಮೀರಿ ಪಂಡಿತರಿಗೆ ತೆರೆಯಬೇಕು.ಇಂತಹನಡೆಗಳು ಭಾರತ ಪಾಕಿಸ್ತಾನದ ನಡುವೆ ನೆಲೆಸಿರುವ ದ್ವೇಷದ ವಾತಾವರಣಹೋಗಲಾಡಿಸುವಲ್ಲಿ ಸಹಕಾರಿಯಾಗುತ್ತದೆ.ಈ ಕುರಿತು ನಾನು ಪ್ರಧಾನಿಯವರಿಗೆ ಪತ್ರ ಬರೆದಿದ್ದೇನೆ ಎಂದು ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
Not too long ago I had written to PM imploring GoI to reopen Sharda Peeth, a temple across LoC for Kash Pandits. An initiative like this at a time when Indo - Pak tensions are at an all time high could help navigate the current impasse. https://t.co/IYRyQ8v5U3
ಪಾಕಿಸ್ತಾನ ಸರ್ಕಾರ ಶಾರದ ಪೀಠಕ್ಕೆ ಹೋಗುವ ದಾರಿಯನ್ನ ತರೆಯುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಕಳೆದ ಒಂದು ವರ್ಷಗಳಿಂದ ಕಾಶ್ಮೀರಿ ಪಂಡಿತರ ಸಂಘಟನೆಯು ಶಾರದ ಪೀಠದ ರಸ್ತೆಯನ್ನು ತೆರೆಯುವಂತೆ ಆಗ್ರಹಿಸಿದ್ದವು.