ಎಲ್ಲರೂ ಈ ಸಪ್ತಾಹದಲ್ಲಿ ಪಾಲ್ಗೊಂಡು ದೈಹಿಕ, ಮಾನಸಿಕ ನೆಮ್ಮದಿ ಹೊಂದುವಂತೆ ಕಂಠಿ ಸಲಹೆ ಮಾಡಿದರು. ಅತಿಥಿಗಳಾಗಿದ್ದ ಜಗನ್ನಾಥರಾವ್ ಜೋಶಿ ಪರಿವಾರದ ಪ್ರಮುಖರಾದ ಮೀನಾಜಿ ಜೋರಾಪೂರ ಮಾತನಾಡಿ ಯೋಗವು ನಮ್ಮ ಸನಾತನ ಸಂಪ್ರದಾಯದ ವಿದ್ಯೆಯಾಗುವುದರ ಜತೆಗೆ ಸರ್ವ ರೋಗಕ್ಕೂ ಮದ್ದಿನಂತಿದೆ. ಆದ್ದರಿಂದ ಎಲ್ಲದಕ್ಕೂ ಆಸ್ಪತ್ರೆಗೆ ಹೋಗುವ ಬದಲಿ ನಿತ್ಯ ಯೋಗ ಅಭ್ಯಾಸ ಮಾಡುವಂತೆ ಸಲಹೆ ಮಾಡಿದರು.