‘ಲಾಲ್ತಂಗ್ಲಿಯಾನಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಚರ್ಚ್ ನನ್ನ ವಿರುದ್ಧ ಯಾಕೆ ಇಂತಹ ಕಠಿಣ ಕ್ರಮ ಕೈಗೊಂಡಿದೆ ಎಂಬುದು ಅರ್ಥವಾಗುತ್ತಿಲ್ಲ. ಮಿಜೋರಾಂನ ಬಹಳಷ್ಟು ಜನರು ಬಿಜೆಪಿಯನ್ನು ಕ್ರೈಸ್ತವಿರೋಧಿ ಎಂದು ಪರಿಗಣಿಸುತ್ತಾರೆ. ಆದರೆ, ಇದು ತಪ್ಪುಗ್ರಹಿಕೆ. ನಾನು ರಾಜಕೀಯಕ್ಕೆ ಹೊಸಬನಾದರೂ ಬಿಜೆಪಿ ಅಭ್ಯರ್ಥಿಯಾಗಿ ಗೆಲ್ಲುವ ವಿಶ್ವಾಸ ಇದೆ’ ಎಂದು ಕಾಲ್ನಿ ಹೇಳಿದ್ದಾರೆ. ಚರ್ಚ್ನ ನಿರ್ಧಾರ ರಾಜಕೀಯಪ್ರೇರಿತ ಎಂದೂ ಅವರು ಆರೋಪಿಸಿದ್ದಾರೆ.