ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿಗೆ ಸಂದ ಉಡುಗೊರೆ ಹರಾಜು ಗಂಗಾ ನದಿ ಶುದ್ಧೀಕರಣಕ್ಕೆ ಹಣ ಬಳಕೆ

Last Updated 10 ಫೆಬ್ರುವರಿ 2019, 18:34 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಂದಿದ್ದ1,800 ಉಡುಗೊರೆಗಳನ್ನು ಹರಾಜು ಹಾಕಲಾಯಿತು ಎಂದು ಪ್ರಧಾನಿ ಕಚೇರಿಯು ಭಾನುವಾರ ತಿಳಿಸಿದೆ.

ಈ ಹರಾಜಿನಿಂದ ಎಷ್ಟು ಹಣ ಸಂಗ್ರಹವಾಯಿತು ಎಂಬ ಮಾಹಿತಿ ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಇಲ್ಲಿ ಒಟ್ಟುಗೂಡಿದ ಹಣವನ್ನು ಗಂಗಾ ನದಿ ಶುದ್ಧೀಕರಣಕ್ಕೆ ಕೈಗೊಂಡಿರುವ ‘ನಮಾಮಿ ಗಂಗಾ’ಯೋಜನೆಗೆ ವಿನಿಯೋಗಿಸಲಾಗುತ್ತದೆ.

ಕೈಯಲ್ಲಿ ಮಾಡಿದ್ದ ಮರದ ಬೈಕ್ ₹5 ಲಕ್ಷಕ್ಕೆ ಬಿಕರಿಯಾಯಿತು. ಮೋದಿ ಹಾಗೂ ರೈಲ್ವೆ ನಡುವಿನ ಬಾಂಧವ್ಯವನ್ನು ಬಿಂಬಿಸುವ ಕಲಾಕೃತಿಯೊಂದು ಇಷ್ಟೇ ಮೊತ್ತಕ್ಕೆ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT